ಹಲೋ ಸ್ನೇಹಿತರೇ, ಕರ್ನಾಟಕದ ಅನ್ನದಾತರಿಗೆ ಒಂದಷ್ಟು ರಿಲೀಫ್ ಸಿಕ್ಕಿದೆ ಯಾಕಂದ್ರೆ ಕಳೆದ ವಾರ ಸುರಿದಿದ್ದ ಮಳೆ ರೈತರ ಜಮೀನಿಗೆ ಒಂದಷ್ಟು ನೀರು ನೀಡಿದೆ. ಈ ಪೈಕಿ ಬೇಸಿಗೆ ಬೆಳೆಗೆ ನೀರಿಲ್ಲ ಎಂಬ ಕೊರಗಿನಲ್ಲಿ ರೈತರು ಪರದಾಡುತ್ತಿದ್ದರು. ಇಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದಾಗ ಮಳೆಯ ಎಂಟ್ರಿ ಭರ್ಜರಿ ಖುಷಿ ಕೊಟ್ಟಿದೆ. ಅದರಲ್ಲೂ ಒಣಗಿ ಹೋಗುತ್ತಿದ್ದ ಬೆಳೆಗೆ ಜೀವ ಬಂದಿದೆ.
![rain alert karnataka](https://i0.wp.com/udyaga.com/wp-content/uploads/2024/04/rain-alert-karnataka-6.jpg?resize=640%2C360&ssl=1)
ಕರ್ನಾಟಕದಲ್ಲಿ ಮಳೆಯ ಅನಿಶ್ಚಿತತೆ ಮುಂದುವರಿದಿದೆ. ಕರ್ನಾಟಕದಲ್ಲಿ ಒಮ್ಮೊಮ್ಮೆ ಭಾರಿ ಮಳೆ ಬಂದು ಅತಿವೃಷ್ಟಿ ಸೃಷ್ಟಿಯಾಗಿ ರೈತರು ಬೆಳೆ ಕಳೆದುಕೊಳ್ಳುತ್ತಾರೆ. ಇನ್ನೂ ಕೆಲವಾರು ಬಾರಿ ವರ್ಷಗಟ್ಟಲೇ ಮಳೆಯೇ ಬಾರದೆ ಕೃಷಿಕರು ಪರದಾಡುತ್ತಾರೆ. ಹೀಗೆ ಮಳೆ ಬರಬೇಕು ಅಂತಾ ರೈತರು ದೇವರ ಮೊರೆ ಹೋಗುತ್ತಾರೆ. ಕೆಲವೊಮ್ಮೆ ವರುಣ ದೇವ ಕರುಣೆ ತೋರಿ ಮಳೆ ಬರಿಸುತ್ತಾನೆ. ಇನ್ನೂ ಕೆಲವು ಬಾರಿ ಮಳೆ ಇಲ್ಲದೆ ಜನಗಳು ಪರದಾಡುತ್ತಾರೆ. ಕಳೆದ ವರ್ಷ ಕೂಡ ಅದೇ ರೀತಿ ಆಗಿತ್ತು. ಹೀಗಾಗಿ ಬೇಸಿಗೆ ಆರಂಭದಲ್ಲೇ ಕರ್ನಾಟಕದ ಕೃಷಿಕರಿಗೆ ಭಾರಿ ಸಮಸ್ಯೆ ಆಗಿತ್ತು. ಆದರೆ ಈಗ ಭರ್ಜರಿ ಮಳೆ ಬಂದ ಕಾರಣಕ್ಕೆ ರೈತರು ಖುಷಿಯಾಗಿ ಬೆಳೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ.
ಗದ್ದೆ, ಹೊಲಗಳಿಗೆ ಹೊಸ ಕಳೆ:
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಭಾರಿ ಬಿಸಿಲಿನಿಂದ, ಜನರು ಬೆಚ್ಚಿಬಿದ್ದಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಭಾರಿ ಬಿಸಿಲು ಸಮಸ್ಯೆ ತಂದೊಡ್ಡಿತ್ತು. ಆದರೆ ಕಳೆದ ವಾರ ಪೂರ್ತಿ ವರುಣದೇವ ಒಂದಷ್ಟು ಕರುಣೆ ತೋರಿಸಿದ್ದ. ಈ ಹಿನ್ನೆಲೆಯಲ್ಲಿ ಜನರು ನಿಟ್ಟುಸಿರು ಬಿಟ್ಟರು. ಆದ್ರೆ ಈ ವಾರ ಮತ್ತೆ ಮಳೆ ಕೈಕೊಟ್ಟಿದೆ. ಹೀಗಿದ್ದರೂ ಒಂದಷ್ಟು ಖುಷಿಯಾಗಿರುವ ರೈತರು ಮುಂದಿನ ದಿನಗಳಲ್ಲಿ ಮತ್ತೆ ಮಳೆರಾಯ ಕರ್ನಾಟಕದಲ್ಲಿ ಅಬ್ಬರಿಸಲಿದ್ದಾನೆ ಎಂದು ಕಾಯುತ್ತಿದ್ದಾರೆ.
ಇದನ್ನೂ ಸಹ ಓದಿ : ಎಲ್ಲಾ ವಿದ್ಯಾರ್ಥಿಗಳಿಗೆ ಕೇಂದ್ರದಿಂದ ₹ 90,000 ವರೆಗೆ ವಿದ್ಯಾರ್ಥಿವೇತನ! ಇಂದೇ ಅಪ್ಲೇ ಮಾಡಿ
ಬೋರ್ಗಳಲ್ಲಿ ನೀರು ಖಾಲಿ:
ಕರ್ನಾಟಕದ ಬಹುತೇಕ ಬೋರ್ಗಳು ಖಾಲಿ ಖಾಲಿ ಆಗಿದ್ದು, ಅಂತರ್ಜಲ ಕುಸಿಯುತ್ತಿರುವ ಕಾರಣಕ್ಕೆ ಜನರು ಕುಡಿಯುವ ನೀರಿಗೂ ಪರದಾಡುತ್ತಿದ್ದರು. ಆದರೆ ಕಳೆದ ವಾರ ಸುರಿದಿದ್ದ ಮಳೆ ಒಂದಷ್ಟು ಕೆರೆ ಹಾಗೂ ತೊರೆಗಳನ್ನು ತುಂಬಿಸಿದೆ. ಈ ನೀರಿನಿಂದ ಇನ್ನೂ ಒಂದು, ಅಥವಾ ಎರಡು ತಿಂಗಳು ದಿನದೂಡಬಹುದು. ಆದ್ರೆ ಮೇ ಅಂತ್ಯಕ್ಕೆಲ್ಲ ಒಳ್ಳೆಯ ಮಳೆಯು ಬೀಳುವ ನಿರೀಕ್ಷೆ ಇರುವುದು ಖುಷಿ ಕೊಡುತ್ತಿದೆ. ಹೀಗೆ ರೈತರು, ಉತ್ತಮವಾಗಿ ಮುಂಗಾರು ಮಳೆ ಬರಲಿದೆ ಅಂತಾ ಕಾಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಭರ್ಜರಿಯಾಗಿ ಮಳೆಯಾಲಿದೆ, ಜನರು ಕೂಡ ನಿಟ್ಟುಸಿರು ಬಿಟ್ಟರು. ಕರ್ನಾಟಕದಲ್ಲಿ ಕಳೆದ ವಾರ ಭರ್ಜರಿಯಾಗಿ ಮಳೆ ಸುರಿದಿತ್ತು, ಆದರೆ ಈ ವಾರ ಮತ್ತೆ ಮಳೆ ಮೋಡಗಳು ಮಾಯವಾಗಿವೆ. ಭಾರಿ ಬಿಸಿಲಿನ ಬೇಗೆಗೆ ಜನರು ಕೂಡ ನರಳಾಡಿದ್ದಾರೆ. ಇದೇ ಸಮಯದಲ್ಲಿ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು, ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬೀಳುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಆದ್ರೂ ಬೆಂಗಳೂರಿನಲ್ಲಿ ಮಾತ್ರ ಮಳೆಯ ಸೂಚನೆ ಸಿಗುತ್ತಿಲ್ಲ. ಹಾಗಾದ್ರೆ ಬೆಂಗಳೂರಿನಲ್ಲಿ ಇದೇ ರೀತಿ ಕೆಟ್ಟ ಬಿಸಿಲು ಜನರ ನೆತ್ತಿ ಸುಡುತ್ತಾ? ಅಥವಾ ಭರ್ಜರಿ ಮಳೆ ಬರುತ್ತಾ? ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.
ಇತರೆ ವಿಷಯಗಳು:
ಗೃಹಜ್ಯೋತಿ ಫಲಾನುಭವಿಗಳಿಗೆ ಕಟ್ಟೆಚ್ಚರ! ಫ್ರೀ ಕರೆಂಟ್ ಬೇಕಾದ್ರೆ ಹೀಗೆ ಮಾಡಿ
ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೆ ಸಿಹಿ ಸುದ್ದಿ! ಗ್ರಾಮವಾರು ಪಟ್ಟಿ ರಿಲೀಸ್
ಹಟ್ಟಿ ಚಿನ್ನದ ಗಣಿಯಲ್ಲಿ ಉದ್ಯೋಗಾವಕಾಶ 168 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ!