ರಾಜ್ಯದ ಸುಮಾರು 34 ಲಕ್ಷ ರೈತರಿಗೆ DBT ಮೂಲಕ ಬೆಳೆ ನಷ್ಟ ಪರಿಹಾರ ಇಂದಿನಿಂದಲೇ ವಿತರಿಸಲಾಗುವುದು. ಇನ್ನೂ 3-4 ದಿನಗಳಲ್ಲಿ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರದ ಹಣ ಜಮಾ ಆಗಲಿದೆ.
![To Crop Loss Compensation Account](https://i0.wp.com/udyaga.com/wp-content/uploads/2024/05/To-Crop-Loss-Compensation-Account.jpg?resize=640%2C360&ssl=1)
ಕೇಂದ್ರದಿಂದ ಬಂದಿರುವ 3454 ಕೋಟಿ ಹಣವನ್ನು ಇನ್ ಪುಟ್ ಸಬ್ಸಿಡಿಗೆ ಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಸರ್ಕಾರವು ನಿರ್ಧರಿಸಿದೆ. ಈಗಾಗಲೇ ರೈತರಿಗೆ ವಿತರಿಸಿದ ಗರಿಷ್ಠವಾದ 2000 ರೂ.ವರೆಗಿನ ಪರಿಹಾರ ಮೊತ್ತವನ್ನು ಕಡಿತ ಮಾಡಿಕೊಂಡು ಬಾಕಿ ಇರುವ ಮೊತ್ತವನ್ನು ಡಿಬಿಟಿ ಮೂಲಕವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
N.D.R.F. ಮಾರ್ಗಸೂಚಿಯ ಅನ್ವಯ ಖುಷ್ಕಿ, ನೀರಾವರಿ, ತೋಟಗಾರಿಕೆಯ ಬೆಳೆಗಳಿಗೆ ನಿಗದಿಯಾದ ಮೊತ್ತವನ್ನು ಅರ್ಹ ಫಲಾನುಭವಿ ರೈತರ ಖಾತೆಗಳಿಗೆ ಜಮಾ ಮಾಡಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಶುಕ್ರವಾರ ಮೊದಲಿಗೆ 15 ಲಕ್ಷ ರೈತರ ಖಾತೆಗಳಿಗೆ ಪರಿಹಾರ ಮೊತ್ತವನ್ನು ಜಮಾ ಮಾಡಲಾಗುತ್ತದೆ. ಬಳಿಕ ಉಳಿದ ರೈತರಿಗೆ 3-4 ದಿನಗಳಲ್ಲಿ ಪರಿಹಾರದ ಹಣವನ್ನು ತಲುಪಲಿದೆ ಎಂದು ಹೇಳಲಾಗಿದೆ.
ಕೇಂದ್ರದಿಂದ ಬಂದಿರುವ ಪರಿಹಾರದ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಲು ಚುನಾವಣಾ ಆಯೋಗದಿಂದ ಒಪ್ಪಿಗೆಯನ್ನು ಪಡೆಯಲಾಗಿದ್ದು, ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟದ ಪರಿಹಾರಕ್ಕೆ ಅರ್ಹರಾಗಿರುವ ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು.
ಇತರೆ ವಿಷಯಗಳು:
ವಾಹನ ಸವಾರರಿಗೆ ಗುಡ್ ನ್ಯೂಸ್! ಮೇ 7 ರಂದು ಟ್ರಾಫಿಕ್ ಚಲನ್ ಮನ್ನಾಕ್ಕೆ ಸರ್ಕಾರದ ಸೂಚನೆ
ಎಲ್ಲಾರಿಗೂ ಈ ತಿಂಗಳ ಪಿಂಚಣಿ ಹಣ ಜಮಾ! ನಿಮಗೂ ಹಣ ಬಂದಿದೆಯಾ ನೋಡಿ