ಹಲೋ ಸ್ನೇಹಿತರೇ, ಬರ ಪರಿಹಾರ ರೈತರ ಖಾತೆಗೆ ವರ್ಗಾವಣೆ ಅಗದಿರಲು ಕಾರಣಗಳು ಏನು ಗೊತ್ತಾ? ಹಣ ಪಡೆಯದೆ ಇರುವವರು ಯಾವ ಕ್ರಮ ಅನುಸರಿಸಿ ಹಣವನ್ನು ಪಡೆದುಕೊಳ್ಳಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
![bara parihara list karnataka](https://i0.wp.com/udyaga.com/wp-content/uploads/2024/05/bara-parihara-list-karnataka.jpg?resize=640%2C360&ssl=1)
“ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ”(NDRF) ಮಾರ್ಗಸೂಚಿಯನ್ವಯ ರಾಜ್ಯದಲ್ಲಿ 32.12 ಲಕ್ಷ ರೈತರಿಗೆ 3,454 ಕೋಟಿ ಬರ ಪರಿಹಾರದ 2ನೇ ಕಂತಿನ ಹಣ DBT ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಇದರಲ್ಲಿ ಸರಿ ಸುಮಾರು 1.5 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 2ನೇ ಕಂತಿನ ಬರ ಪರಿಹಾರದ ಹಣ ವರ್ಗಾವಣೆ ಆಗಿಲ್ಲ. ಈ ರೈತರಿಗೆ ಯಾವ ಕಾರಣಕ್ಕೆ ಪರಿಹಾರದ ಹಣ ಜಮೆಯಾಗಿಲ್ಲ? ಇದನ್ನು ಸರಿಪಡಿಸಿಕೊಳ್ಳುವ ಹೇಗೆ? ಪರಿಹಾರ ಜಮಾ ಆಗದೇ ಇರುವ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು.
ಬರ ಪರಿಹಾರ ಜಮೆ ಆಗದಿರಲು ಕಾರಣ
1) FID ನಂಬರ್ ರಚನೆ ಆಗದಿರುವುದು / FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಆಗದಿರುವುದು.
2) ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಜೋಡಣೆ.
3) ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆ ರದ್ದುಗೊಂಡಿರುವುದು.
4) ಆಧಾರ್ ಕಾರ್ಡ್ನಲ್ಲಿರುವ ಹೆಸರು ಪಹಣಿಯಲ್ಲಿರುವ ಹೆಸರು ತಾಳೆ ಆಗದಿರುವುದು.
ಬರ ಪರಿಹಾರ ಜಮಾ ಆಗದ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ
ಬರ ಪರಿಹಾರ ಜಮಾ ಆಗದೇ ಇರುವ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಚೆಕ್ ಮಾಡಲು ರೈತರು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಭೂಮಿ ಎಂಬ ವೆಬ್ಸೈಟ್ ಓಪನ್ ಆಗುತ್ತದೆ ಬರ ಪರಿಹಾರ ಜಮಾ ಆಗದ ರೈತರ ಪಟ್ಟಿಯನ್ನು ನೀಡಲಾಗಿರುತ್ತದೆ ಅದನ್ನು ನಿಮ್ಮ ಮೊಬೈಲ್ನಲ್ಲೆ ಚೆಕ್ ಮಾಡಿ.
ಇತರೆ ವಿಷಯಗಳು
ಜುಲೈನಿಂದ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ 8,500 ರೂ ಜಮಾ!!
ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ!