ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಉದ್ದೇಶವು ದೇಶದ ಮನೆಗಳ ಮೇಲೆ ಸೌರ ಫಲಕಗಳ ಸ್ಥಾಪನೆಯನ್ನು ಉತ್ತೇಜಿಸುವುದಾಗಿದೆ. ಈಗ ಈ ಯೋಜನೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡುವುದಕ್ಕೆ ಮುಂದಾಗಿವೆ. ಹಾಗಾದರೆ ಯಾವ ಯಾವ ಬ್ಯಾಂಕ್ ನಲ್ಲಿ ಸೌರ ಫಲಕಗಳ ಸ್ಥಾಪನೆಗೆ ಸಾಲ ಸಿಗಲಿದೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.
Contents
ಯಾವ ಯಾವ ಬ್ಯಾಂಕ್ ಗಳು ಸೌರ ಫಲಕ ಅಳವಡಿಕೆಗೆ ಸಾಲ ನೀಡುತ್ತಿವೆ?
1) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ:- ಸೌರ ಫಲಕ ಅಳವಡಿಕೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವು ಷರತ್ತುಗಳ ಮೇರೆಗೆ ಸಾಲವನ್ನು ನೀಡುತ್ತಿದೆ. ಅರ್ಜಿ ಸಲ್ಲಿಸಿದವರಿಗೆ ಗರಿಷ್ಠ 2 ಲಕ್ಷ ರೂ. ಸಾಲವನ್ನು ನೀಡಲಾಗುವುದು. ನೀವು ಈ ಬ್ಯಾಂಕ್ ನಲ್ಲಿ ಸಾಲ ಪಡೆಯಬೇಕೆಂದರೆ ನಿಮ್ಮ ಮನೆಯ ವಿಳಾಸ, ನಿಮ್ಮ ಗುರುತಿನ ಚೀಟಿ, ಆದಾಯದ ಮೂಲದ ಬಗ್ಗೆ ಮಾಹಿತಿ ಮತ್ತು ಅಸ್ತಿ ಪುರಾವೆಗಳು, ನೀವು ಸೌರ ಫಲಕವನ್ನು ಏಷ್ಟು ಗುಣಮಟ್ಟದ ಮತ್ತು ಇದರ ಉತ್ಪಾದನೆಯ ಪ್ರಮಾಣ ತಿಳಿಸಬೇಕು.
2)ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ:- ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಡಿ 3 kW ಸಾಮರ್ಥ್ಯದ ಸೌರ ಸ್ಥಾಪನೆಯನ್ನು ಸ್ಥಾಪಿಸಲು ಗರಿಷ್ಠ 6 ಲಕ್ಷ ರೂ. ಗಳ ವರೆಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ಸಾಲವನ್ನು ನೀಡಲಾಗುವುದು.
3) ಪಂಜಾಬ್ ನ್ಯಾಷನಲ್ ಬ್ಯಾಂಕ್:- ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಡಿ 10kw ಸಾಮರ್ಥ್ಯದ ಸೌರ ಸ್ಥಾಪನೆಯನ್ನು ಸ್ಥಾಪಿಸಲು 6 ಲಕ್ಷ ರೂ. ಸಾಲವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಲಿದೆ.
4) ಕೆನರಾ ಬ್ಯಾಂಕ್:- ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಡಿ 3kw ಸಾಮರ್ಥ್ಯದ ಸೌರ ಸ್ಥಾಪನೆಯನ್ನು ಸ್ಥಾಪಿಸಲು 2 ಲಕ್ಷ ರೂ. ಗಳ ವರೆಗೂ ಸಾಲ ನೀಡಲಾಗುವುದು.
ಈ ಯೋಜನೆ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.
ಪ್ರಧಾನ ಮಂತ್ರಿಗಳು ಘೋಷಣೆ ಮಾಡಿರುವ ಯೋಜನೆಯನ್ನು ಜಾರಿಗೆ ತರಲು ಸಚಿವ ಸಂಪುಟವು ಮಧ್ಯಂತರ ಬಜೆಟ್ ನಲ್ಲಿ ಒಪ್ಪಿಗೆ ನೀಡಿದರೆ. ಇದರ ಪ್ರಕಾರ ದೇಶದ 1 ಕೋಟಿಗೂ ಅಧಿಕ ಮನೆಗಳ ಮೇಲೆ ಸೌರ ಫಲಕ ಅಳವಡಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ. ಸಚಿವ ಸಂಪುಟದಲ್ಲಿ ಈ ಯೋಜನೆಯ ಸಲುವಾಗಿ ಬರೋಬ್ಬರಿ 75,000 ಕೋಟಿ ರೂ. ಮೀಸಲಿಡಲಾಗಿದೆ.
ಸೋಲಾರ್ ಪ್ಯಾನೆಲ್ ಅಳವಡಿಸುವುದರಿಂದ ಏನು ಲಾಭ?
ಮನೆಯ ಮೇಲ್ಛಾವಣಿಯ ಮೇಲೆ ಸೌರ ಫಲಕವನ್ನು ಅಳವಡಿಕೆ ಮಾಡುವುದರಿಂದ ನಿಮಗೆ ಕರೆಂಟ್ ಬಿಲ್ ಕಟ್ಟಿವ ತಾಪತ್ರೆ ಇರುವುದಿಲ್ಲ. ನೀವು ಬೇರೆಯವರಿಗೆ / ಸರ್ಕಾರಕ್ಕೆ ವಿದ್ಯುತ್ ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಬಹುದು. ವಿದ್ಯುತ್ ವ್ಯತ್ಯಯ / ಬೇರೆಯವರ ಮನೆಯಲ್ಲಿ ಫ್ಯೂಸ್ ಹೋದರೆ / ಲೈನ್ ಫಾಲ್ಟ್ ಎಂದು ವಿದ್ಯುತ್ ಸಂಪರ್ಕ ಕಡಿತವಾಗುವುದಿಲ್ಲ. ಈ ವಿದ್ಯುತ್ ಪ್ಯಾನಲ್ ಅಳವಡಿಸಿಕೊಂಡರೆ ನಿಮಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗುತ್ತದೆ..
ಇತರೆ ವಿಷಯಗಳು
ಗೃಹಲಕ್ಷ್ಮಿ 7ನೇ ಕಂತಿನ 2000 ದುಡ್ಡು ಜಮೆ.! ಇನ್ನೂ ಹಣ ಜಮೆ ಆಗದೇ ಇದ್ದವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ
SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ!! ಶಿಕ್ಷಣ ಮಂಡಳಿಯ ಹೊಸ ರೂಲ್ಸ್