ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಡೆಯಿಂದ ಜಾರಿಯಲ್ಲಿರುವ 05 ಯೋಜನೆಗಳ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಎಷ್ಟು ದಿನ ಮುಂದೂಡಿಕೆ ಮಾಡಲಾಗಿದೆ ಮತ್ತು ಆ 5 ಯೋಜನೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಉದ್ಯೋಗಿನಿ ಯೋಜನೆ, ಚೇತನ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಧನಶ್ರೀ ಯೋಜನೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳನ್ನು ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು 30 ಸೆಪ್ಟೆಂಬರ್ 2024 ರವರೆಗೂ ಮುಂದೂಡಿಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿಕೊಡಲಾಗಿದೆ. .
Contents
ಯಾವೆಲ್ಲ ಯೋಜನೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಲಾಗಿದೆ ?
- ಉದ್ಯೋಗಿನಿ ಯೋಜನೆ.
- ಚೇತನ ಯೋಜನೆ.
- ಧನಶ್ರೀ ಯೋಜನೆ.
- ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ.
- ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ.
ಎಲ್ಲಾ ಯೋಜನೆಗೂ ಮುಖ್ಯವಾದ ದಾಖಲೆಗಳು?
- ಆಧಾರ್ ಕಾರ್ಡ್ ಪ್ರತಿ.
- ಅರ್ಜಿದಾರರ ಬ್ಯಾಂಕ್ ಖಾತೆ
- ರಾಜ್ಯದ ಖಾಯಂ ನಿವಾಸಿ
- ವಾಸ ಸ್ಥಳ ದೃಢೀಕರಣ ಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳ ಸಮೇತ ಕೊನೆ ದಿನಾಂಕ ಮುಕ್ತಾಯವಾಗುವುದರೊಳಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಅಥವಾ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು.
ಇತರೆ ವಿಷಯಗಳು
ಅಡುಗೆ ಎಣ್ಣೆ ದರ ದಿಢೀರ್ 25 ರೂ ಏರಿಕೆ.! ಈ ಎಣ್ಣೆಗೆಲ್ಲಾ ಎಷ್ಟು ರೇಟ್ ಗೊತ್ತಾ?
ಹಣಕಾಸು ಸಚಿವರ ಒಂದೇ ಘೋಷಣೆ ಚಿನ್ನದ ಬೆಲೆ ಪಾತಾಳಕ್ಕೆ.! ಖರೀದಿಗೆ ಮುಗಿ ಬಿದ್ದ ಜನ