ಹಲೋ ಸ್ನೇಹಿತರೇ, ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ಹೊಸದಾಗಿ APL ಮತ್ತು BPL ಕಾರ್ಡ್ ಅರ್ಜಿ ಸಲ್ಲಿಕೆ ಮಾಡಿದಂತಹ ಜನರಿಗೆ ಪಡಿತರ ಚೀಟಿಯನ್ನು ನಿಗದಿಗಿಂತಲೂ ಹೆಚ್ಚುವರಿಯಾಗಿ ವಿತರಣೆ ಮಾಡಬಾರದು. 3 ತಿಂಗಳಿನಿಂದ ಪಡಿತರವನ್ನು ಪಡೆದ ಕಾರ್ಡನ್ನು ರದ್ದು ಮಾಡಬೇಕು. ಹಾಗೂ ಬಾಕಿ ಉಳಿದಿರುವ ಪಡಿತರ ಅರ್ಜಿಗಳಿಗೆ ಏಕಕಾಲದಲ್ಲಿ ಪಡಿತರ ಕಾರ್ಡನ್ನು ವಿತರಿಸಬಾರದು ಎಂದು ಸರ್ಕಾರ ನಿರ್ಭಂದನೆ ಹೇರಿ, ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಅಂತಾ ಆಹಾರ ಇಲಾಖೆಗೆ ಆದೇಶಿಸಿದೆ
ಆಹಾರ ಇಲಾಖೆಯ ಪ್ರಕಾರ ಹೆಚ್ಚುವರಿಯಾಗಿ ರಾಜ್ಯದಲ್ಲಿ ಸುಮಾರು 13 ಲಕ್ಷಕ್ಕೂ ಹೆಚ್ಚು ಪಡಿತರ ಕಾರ್ಡ್ ವಿತರಣೆ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ನಷ್ಟ ಆಗುತ್ತದೆ. ಪಡಿತರ ಕಾರ್ಡ್ ಹೆಚ್ಚುವರಿ ವಿಲೆವಾರಿಯಿಂದ ಸರ್ಕಾರಕ್ಕೆ ಸುಮಾರು 100 ಕೋಟಿಯಷ್ಟು ನಷ್ಟವಾಗಿದೆ ಎನ್ನಲಾಗಿದೆ. ಹಾಗಾಗಿ ಸರ್ಕಾರ ಪಡಿತರ ಚೀಟಿಯ ಹೆಚ್ಚುವರಿ ವಿಲೆವಾರಿಯ ಮೇಲೆ ನಿರ್ಭಂದನೆಯನ್ನು ಹೇರಲು ಆದೇಶಿಸಿದೆ
ಇದನ್ನೂ ಸಹ ಓದಿ : ಜೂನ್ 1 ರಿಂದ ಹೊಸ ನಿಯಮ: ಈ ನಿಯಮಗಳನ್ನು ಬ್ರೇಕ್ ಮಾಡಿದ್ರೆ ದಂಡ ಗ್ಯಾರಂಟಿ!
ನಿರ್ಭಂದನೆಗಳು:
- ನಿಗದಿಗಿಂತಲೂ ಹೆಚ್ಚುವರಿಯಾಗಿ ವಿತರಣೆ ಮಾಡಬಾರದು
- ಬಾಕಿ ಉಳಿದಿರುವ ಪಡಿತರ ಅರ್ಜಿಗಳಿಗೆ ಏಕಕಾಲದಲ್ಲಿ ಪಡಿತರ ಕಾರ್ಡನ್ನು ವಿತರಿಸಬಾರದು
- ರೇಷನ್ ಕಾರ್ಡ್ ಪಡೆಯುವ ಉದ್ದೇಶದ ಉಲ್ಲೇಖ
ಇನ್ನುಮುಂದೆ ರೇಷನ್ ಕಾರ್ಡನ್ನು ವಿತರಣೆ ಮಾಡುವ ಸಂದರ್ಭದಲ್ಲಿ ವಿತರಣಾ ಉದ್ದೇಶದ ಆಧಾರದ ಮೇಲೆ ವಿಲೇವಾರಿ ಮಾಡಲಿದೆ. ಅಂದರೆ ಹೊಸ ಅರ್ಜಿ ಸಲ್ಲಿಕೆ ಮಾಡಿರುವುದು ಗುರುತಿನ ಚೀಟಿಗಾಗಿ ಮಾತ್ರವೇ ಅಥವಾ ಪಡಿತರಕ್ಕಾಗಿ ಅನ್ನುವುದನ್ನು ಪ್ರತ್ಯೇಕವಾಗಿ ನಮೂದಿಸಿ ರೇಷನ್ ಕಾರ್ಡ್ ಪಡಿಯಬೇಕಾಗುತ್ತದೆ.
ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :
- ನಿಮ್ಮ ಫೋನ್ ನಂಬರ್
- ವಾಸಸ್ಥಳ ಪ್ರಮಾಣ ಪತ್ರ
- ರೇಷನ್ ಕಾರ್ಡ್ ಅಲ್ಲಿ ಸೇರಿಕೊಳ್ಳುವ ಎಲ್ಲರ ಜಾತಿ ಮತ್ತು ಆದಾಯ ಪ್ರಮಾಣ
- ರೇಷನ್ ಕಾರ್ಡ್ ಅಲ್ಲಿ ಸೇರಿಕೊಳ್ಳುವ ಎಲ್ಲರ ಆಧಾರ್ ಕಾರ್ಡ್ ( ಫೋನ್ ನಂಬರ್ ಲಿಂಕ್ ಆಗಿರಬೇಕು)
ಇತರೆ ವಿಷಯಗಳು:
ಪಿಎಂ ಕಿಸಾನ್ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಈ ದಿನ ಖಾತೆಗೆ ಹಣ ಜಮಾ
ಮನೆಯಲ್ಲೇ ಕುಳಿತು ಹೊಸ ರೇಷನ್ ಕಾರ್ಡ್ ಮಾಡಿಸಲು ಹೀಗೆ ಅರ್ಜಿ ಸಲ್ಲಿಸಿ!
ಪಿಎಂ ಕಿಸಾನ್ ನಿಧಿಗೆ ಹೊಸ ಅಪ್ಡೇಟ್! ಈ ಬಾರಿ ಯಾವ ನಿಯಮ ಬದಲಾವಣೆ