ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ವಿವಿಧ ದಾರ್ಮಿಕ ಸ್ಥಳಗಳನ್ನು ಟ್ರೈನ್ ಮೂಲಕ ಭೇಟಿ ಮಾಡಲು ಇಚ್ಚೆಯಿರುವ ನಾಗರಿಕರಿಗೆ ಪ್ರತಿ ವರ್ಷ ಸಹಾಯಧನವನ್ನು ನೀಡಲಾಗುವುದು, ಇದರಂತೆ ಈ ವರ್ಷವು ಸಹ ಈ ಯೋಜನೆಯಡಿ ಪ್ರವಾಸವನ್ನು ಕೈಗೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಇದು ಯಾವ ಯೋಜನೆ ಮತ್ತು ಇದಕ್ಕೆ ಅರ್ಜಿ ಹಾಕುವುದು ಹೇಗೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.
ಈ ಯಾತ್ರೆ ಎಲ್ಲಿಂದ ಪ್ರಾರಂಭವಾಗುವುದು? ಯಾರೆಲ್ಲಾ ಯಾತ್ರೆಯಲ್ಲಿ ಭಾಗವಹಿಸಬಹುದು? ಯಾವೆಲ್ಲಾ ದಾರ್ಮಿಕ ಸ್ಥಳಗಳನ್ನು ಈ ಯಾತ್ರೆಯಲ್ಲಿ ಭೇಟಿ ಮಾಡಲಾಗುವುದು?
Contents
ಪ್ರಮುಖ ದಿನಾಂಕಗಳು:
ಯಾತ್ರೆ ಪ್ರಾರಂಭ ದಿನಾಂಕ: 28 ಸೆಪ್ಟಂಬರ್ 2024
ಯಾತ್ರೆ ಪ್ರಾರಂಭವಾಗುವ ದಿನಾಂಕ: 05 ಅಕ್ಟೋಬರ್ 2024
ಯಾತ್ರಿಕರು ರೈಲು ಹತ್ತಲು ಅವಕಾಶವಿವರ ನಿಲ್ದಾಣಗಳು:
1) ಬೆಂಗಳೂರು(SMVT)
2) ತುಮಕೂರು
3) ಅರಸಿಕೆರೆ
4) ಬೀರೂರು
5) ದಾವಣಗೆರೆ
6) ಹಾವೇರಿ
7) ಬೆಳಗಾವಿ
ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ – ಭಾರತ್ ಗೌರವ್ ದ್ವಾರಕಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದ್ವಾರಕಾ, ನಾಗೇಶ್ವರ, ಸೋಮನಾಥ ಹಾಗೂ ತ್ರಯಂಬಕೇಶ್ವರ ದೇವಾಲಯಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಪ್ಯಾಕೇಜ್ಗೆ ಒಟ್ಟು ₹30,000 ತಗುಲಲಿದ್ದು, ಈ ಪೈಕಿ ರಾಜ್ಯ ಸರ್ಕಾರದ ವತಿಯಿಂದ ಅಂದಾಜು ₹15,000 ಮೊತ್ತವನ್ನು ಭರಿಸಲಾಗುವುದು. ಯಾತ್ರಾರ್ಥಿಗಳು ಬುಕ್ಕಿಂಗ್ ಮೊತ್ತವಾಗಿ ₹15,000 ಅನ್ನು ಮಾತ್ರ ಪಾವತಿಸಬೇಕಾಗುತ್ತದೆ.
ಪ್ರವರ್ಗ ʼCʼ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು / ನೌಕರರು ಭಾರತ್ ಗೌರವ್ ದ್ವಾರಕಾ ಯಾತ್ರೆ ತೆರಳಲು ಇಚ್ಛಿಸಿದ್ದಲ್ಲಿ ದಾಖಲೆಗಳೊಂದಿಗೆ ಆಯುಕ್ತರ ಕಚೇರಿಗೆ ನೇರವಾಗಿ ಸೆಪ್ಟೆಂಬರ್ 20ರ ಒಳಗಾಗಿ ಮನವಿ ಸಲ್ಲಿಸಬಹುದಾಗಿದೆ.
ಸಹಾಯಧನ ವಿವರ:
ಪ್ರವಾಸದ ಒಟ್ಟು ಪ್ಯಾಕೇಜ್ ಮೊತ್ತ: 30,000/-
ರಾಜ್ಯ ಸರ್ಕಾರ ಪಾವತಿಸುವ ಮೊತ್ತ: 15,000/-
ಯಾತ್ರಾರ್ಥಿಗಳು ಪಾವತಿಸಬೇಕಾದ ಮೊತ್ತ: 15,000/-
ಯಾತ್ರೆಯಲ್ಲಿ ನೀಡಲಾಗುವ ಸೌಲಭ್ಯಗಳು:
1) ಪ್ಯಾಕೇಜ್ನಲ್ಲಿ 3 ಟೈರ್ ಎ.ಸಿ. ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ & ದರ್ಶನದ ವ್ಯವಸ್ಥೆ
2) ಪ್ರಯಾಣಿಸುವಾಗ ಆಧುನಿಕ ಪ್ಯಾ೦ಟ್ರಿ ಕಾರಿನಲ್ಲಿ ತೆಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ.
3) ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ
ಬುಕ್ಕಿಂಗ್ಗಾಗಿ: Apply Now
ಇತರೆ ವಿಷಯಗಳು
ಡಿಗ್ರಿ ಓದೋರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿ 50,000 ಹಣ ಸಿಗುತ್ತೆ
ಮಹಿಳೆಯರು ನೈಟಿ ಹಾಕೊಂಡ್ರೆ ದಂಡ, ಪುರುಷರು ಲುಂಗಿ ಉಟ್ರೆ ದಂಡ! ಇಲ್ಲಿನ ವಿಚಿತ್ರ ರೂಲ್ಸ್ ನೋಡಿ