ಇನ್ನೂ 3 ವಾರ ರಾಜ್ಯದಲ್ಲಿ ಬಿಸಿಲೋ ಬಿಸಿಲು.! ಯುಗಾದಿ ನಂತರ ಮುಂಗಾರು ಪೂರ್ವ ಮಳೆ?
ಹಲೋ ಸ್ನೇಹಿತರೇ, ಹವಾಮಾನ ಇಲಾಖೆಯ ವರದಿಯ ಪ್ರಕಾರ ಇನ್ನೂ 3 ವಾರ ಒಣಹವೆ ಮುಂದುವರೆಯುತ್ತದೆ. ಜೊತೆಗೆ ನೀರಿನ ಬವಣೆಯೂ ಹೆಚ್ಚಾಗಲಿದೆ ಆದರೆ ಯುಗಾದಿಯ ನಂತರ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯಲಿದೆ. ಬಳಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (KSNMDC)ತನ್ನ ವರದಿಯಲ್ಲಿ ತಿಳಿಸಿದೆ ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ. ರಾಜ್ಯದಲ್ಲಿ ಮುಂದಿನ 2 ವಾರಗಳ ಕಾಲ ಬಿಸಿಲು, ಒಣ ಹವೆ ತೀವ್ರಗೊಳ್ಳಲಿದ್ದು, ಬರಗಾಲದ ಬವಣೆ ಹೆಚ್ಚಾಗಲಿದೆ. ತಾಪಮಾನ ಏರಿಕೆ…