ಬೆಂಗಳೂರು: ಪ್ರೌಢಶಾಲೆ ಶಿಕ್ಷಕರ ರಜೆಯನ್ನ 15 ದಿನ ಕಡಿತ ಮಾಡಲಾಗಿದ್ದು, ಇಂದಿನಿಂದಲೇ ವಿಶೇಷ ತರಗತಿಯನ್ನು ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿಯು ತರಾತುರಿಯಲ್ಲಿ ನಿರ್ದೇಶನವನ್ನು ನೀಡಿದೆ. ಇದಕ್ಕೆ ಶಿಕ್ಷಕರ ವಲಯದಿಂದ ತೀವ್ರವಾದ ಆಕ್ರೋಶ ವ್ಯಕ್ತವಾಗಿದೆ.
ಜೂನ್ -ಜುಲೈನಲ್ಲಿ ನಡೆಯಲಿರುವ SSLC ಪರೀಕ್ಷೆ -2ಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಮೇ 15 ರಿಂದ ಜೂನ್ 5ರವರೆಗೆ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷವಾದ ತರಗತಿಯನ್ನು ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ನಿರ್ದೇಶನವನ್ನು ನೀಡಲಾಗಿದೆ.
ಈ ಬಾರಿ SSLC ಪರೀಕ್ಷಾ ಪಲಿತಾಂಶವು ಭಾರಿ ಕುಸಿತವನ್ನು ಕಂಡ ಹಿನ್ನೆಲೆಯಲ್ಲಿ ಸರ್ಕಾರವು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ಮೇ 29 ರವರೆಗೆ ಬೇಸಿಗೆಯ ರಜೆ ಇದ್ದರೂ ಮೇ 15 ರಿಂದಲೇ ಶಾಲೆಗಳಿಗೆ ಬರುವಂತೆ ತಿಳಿಸಿದೆ. ಇದಕ್ಕೆ ಶಿಕ್ಷಕರ ವಲಯಗಳಿಂದ ತೀವ್ರವಾದ ಆಕ್ರೋಶವು ವ್ಯಕ್ತವಾಗಿದೆ.
ಇತರೆ ವಿಷಯಗಳು:
ರೈತರಿಗೆ ಬೆಳೆ ಸಾಲ ಬೇಕಿದ್ದರೆ ತಪ್ಪದೇ ಈ ಕೆಲಸ ಮಾಡಿ! ಸರ್ಕಾರದ ಸೂಚನೆ
ಸರ್ಕಾರದ ಅಪ್ಡೇಟ್: ರೈತರ ಖಾತೆಗೆ ₹4,000 ಜಮಾ ಕಾರ್ಯ ಆರಂಭ!!