ಹಲೋ ಗೆಳೆಯರೇ, ಬಹುತೇಕ ಎಲ್ಲಾ ಸರ್ಕಾರಿ ಯೋಜನೆಗಳ ಅರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳಿಗೆ ಜಮಾ ಮಾಡಲಾಗುತ್ತದೆ. ಈ ಕಾರಣದಿಂದಾಗ ನಾಗರಿಕರು ತಮ್ಮ ಆಧಾರ್ ವಿವರಣೆಯನ್ನು ಸರಿಯಾಗಿ ನವೀಕರಿಸುದು ಅವಶ್ಯಕ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಇನ್ನು ಮುಂದೆ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಹಣ ಪಡೆಯಲು ಈ ಕೆಲಸವನ್ನು ತಪ್ಪದೇ ಮಾಡಿ. ಯಾವುದು ಆ ಕೆಲಸ? ಸರ್ಕಾರಿ ಯೋಜನೆಗಳ ಹಣವನ್ನು ಪಡೆಯಲು ಏನು ಮಾಡಬೇಕು?
ಇತ್ತೀಚೇಗೆ ಕೆಲವು ತಿಂಗಳಿಂದ ಕೇಂದ್ರದ ಆಧಾರ್ ಕಾರ್ಡ್ ಪ್ರಾಧಿಕಾರದಿಂದ 10 ವರ್ಷ ಪೂರ್ಣಗೊಂಡಿರುವ ಅಂದರೆ ಕಳೆದ 10 ವರ್ಷದಲ್ಲಿ ಅಧಾರ್ ಕಾರ್ಡ್ ನವೀಕರಣ ಮಾಡದೇ ಇರುವ ಎಲ್ಲಾ ಸಾರ್ವಜನಿಕರು ತಪ್ಪದೇ ಜೂನ್ ಒಳಗೆ ಉಚಿತವಾಗಿ ತಮ್ಮ ತಮ್ಮ ಅಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಈ ಸಂಬಂಧ ಸಾರ್ವಜನಿಕರು ಇನ್ನು ಮುಂದೆ ಸರ್ಕಾರಿ ಯೋಜನೆಗಳ ಹಣವನ್ನು ಪಡೆಯಲು 10 ವರ್ಷದಲ್ಲಿ ಆಧಾರ್ ಅಪ್ಡೇಟ್ ಮಾಡಿಕೊಳ್ಳದವರು ಕೂಡಲೇ ತಮ್ಮ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬೇಕು.
ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ವಿಧಾನ:
ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಆಧಾರ್ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಿ ಈ ಕೆಳಗೆ ನೀಡಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಆಧಾರ್ ಕಾರ್ಡ್ ನವೀಕರಣಕ್ಕೆ ಅಪ್ಲೇ ಮಾಡಬಹುದು.
Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Aadhar update link ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಿ.
Step-2: ನಂತರ “Login” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆ & ಕ್ಯಾಪ್ಚ್ ಕೋಡ್ ಅನ್ನು ಹಾಕಿ “Send OTP” ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.
Step-3: ಇದಾದ ಬಳಿಕ ಈ ಪೇಜ್ ನಲ್ಲಿ “Document update” ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ “Next” ಬಟನ್ ಮೇಲೆ ಕ್ಲಿಕ್ ಮಾಡಿ.
Step-4: ಈ ಪುಟದಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆಯೇ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದ ವಿವರ ಸರಿಯಾಗಿದಿಯೇ ಎಂದು ಚೆಕ್ ಮಾಡಿ “I verify above details are correct” ಬಟನ್ ಮೇಲೆ ಕ್ಲಿಕ್ ಮಾಡಿ “Next” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
Step-5: ಮೇಲಿನ ಹಂತಗಳನ್ನು ಪೂರ್ತಿಯಾದ ಬಳಿಕ ಈ ಪೇಜ್ ನಲಿ ನಿಮ್ಮ ಗುರುತಿನ್ನ ಪುರಾವೆ & ವಿಳಾಸ ಪುರಾವೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Next” ಬಟನ್ ಒತ್ತಿ “Submit” ಮೇಲೆ ಕ್ಲಿಕ್ ಮಾಡಿ.
ಅಗತ್ಯ ದಾಖಲೆಗಳು
1)ಅಧಾರ್ ಕಾರ್ಡ್
2)ಮೊಬೈಲ್ ನಂಬರ್
3)ಗುರುತಿನ ಚೀಟಿ ಮತ್ತು ಪಡಿತರ ಚೀಟಿ
4)ಪಾನ್ ಕಾರ್ಡ್ ಅಥವಾ ಗ್ಯಾಸ್ ಬಿಲ್
Aadhar helpline number: 1947
adhar update link- Click here
ಇತರೆ ವಿಷಯಗಳು
ಇಂದಿನಿಂದ 4 ದಿನದವರೆಗೆ ರಾಜ್ಯದಲ್ಲಿ ಭಾರೀ ಗಾಳಿ-ಮಳೆ! ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ನಾಳೆ 5 ಜಿಲ್ಲೆಗಳಲ್ಲಿ 24 ಗಂಟೆ ಅಂತರದಲ್ಲಿ 18 ಸೆಂಮೀ ಮಳೆ! ಪ್ರವಾಹದ ಭೀತಿ